Translate

OUR VISITER ON DATE

Tuesday, February 28, 2012

೨೮ ರ ಅಂಚೆ ಮುಷ್ಕರ ಯಶಸ್ವಿ -ಶಿವಮೊಗ್ಗ ಅಂಚೆ ವಿಭಾಗ ಸಂಪೂರ್ಣ ಸ್ಥಗಿತ

ಕೇಂದ್ರ ಸರಕಾರೀ ನೌಕರರ ಸಮನ್ವಯ ಸಮಿತಿ ಮತ್ತು ನಮ್ಮ ಕೆಂದ್ರ ಸಂಘಗಳ ಕರೆಯ ಮೇರೆಗೆ ದಿನಾಂಕ ೨೮.೦೨.೨೦೧೧ ರಂದು ಒಂದು ದಿನದ ಮುಷ್ಕರವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಶಿವಮೊಗ್ಗ ವಿಭಾಗದ ಎಲ್ಲ ಕಛೇರಿಗಳಲ್ಲೂ ಅಂಚೆ ಸೇವೆ ಸ್ತಬ್ದಗೊಂಡಿತ್ತು. ಶಿವಮೊಗ್ಗ , ಭದ್ರಾವತಿ ಮತ್ತು ಸಾಗರ ಪ್ರಧಾನ ಅಂಚೆ ಕಛೇರಿಗಳ ಮುಂದೆ ಮುಷ್ಕರ ನಿರತ ನೌಕರರು ಸಭೆ ನಡೆಸಿದರು. ಶಿವಮೊಗ್ಗ ಪ್ರಧಾನ ಅಂಚೆ ಕಚೇರಿಯ ಮುಂದೆ ನಡೆದ ಸಭೆಯಲ್ಲಿ ಪೋಸ್ಟ್ ಮ್ಯಾನ್ ಮತ್ತು ಗ್ರೂಪ್ ಡಿ ಸಂಘದ ವಲಯ ಅಧ್ಯಕ್ಷರಾದ ಕಾಂ. ಕೆ.ಎಸ್ ರಂಗನಾಥ್, ಗ್ರೂಪ್ ಸಿ ಸಂಘದ ವಲಯ ಹಣಕಾಸು ಕಾರ್ಯದರ್ಶಿ ಕಾಂ.ಪ್ರಕಾಶ್ ರಾವ್, ಶಿವಮೊಗ್ಗ ವಿಭಾಗದ ಗ್ರೂಪ್ ಸಿ ಸಂಘದ ಕಾರ್ಯದರ್ಶಿ ಕಾಂ.ಜಿ.ರಾಘವೇಂದ್ರ , ಸಹಾಯಕ ಕಾರ್ಯದರ್ಶಿ, ಕಾಂ.ಚಂದ್ರಶೇಖರ್ , ರಾಷ್ಟ್ರೀಯ ಅಂಚೆ ನುಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಕಾಂ.ಬಿ.ಜೆ.ಸುಂದರೇಶ್, ಕಾಂ. ಹರೀಶ್, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಂತ್ಯದಲ್ಲಿ ಪೋಸ್ಟ್ ಮ್ಯಾನ್ ಮತ್ತು ಗ್ರೂಪ್ ಡಿ ಸಂಘದ ವಿಭಾಗೀಯ ಕಾರ್ಯದರ್ಶಿ ಮತ್ತು ಶಿವಮೊಗ್ಗ ವಿಭಾಗದ ಜೆ.ಸಿ.ಎ ಕಾರ್ಯದರ್ಶಿ ಕಾಂ.ಹೆಚ್.ಆರ್, ಈಶ್ವರಪ್ಪ ಮಾತನಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ವಂದಿಸಿದರು. ಶಿವಮೊಗ್ಗ ಜಂಟೀ ಕಾರ್ಮಿಕ ಸಮಿತಿಯಿಂದ ಬೃಹತ್ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಎಲ್ಲಾ ವರ್ಗದ ನೌಕರರು ಭಾಗವಹಿಸಿದ್ದರು. ಅಂತ್ಯದಲ್ಲಿ ಜಿಲ್ಲಾದಿಕಾರಿಗಳ ಕಚೇರಿಯ ಮುಂದೆ ಬಾರಿ ಬೃಹತ್ ಸಭೆ ನಡೆಸಿ ಜಿಲ್ಲಾದಿಕಾರಿಗಳಿಗೆ ಮನವಿ ಅರ್ಪಿಸಲಾಯಿತು.
ಶಿವಮೊಗ್ಗ ವಿಭಾಗದಲ್ಲಿ ಎಂದಿನಂತೆ ಮುಷ್ಕರದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲ ನೌಕರ ಬಂದುಗಳಿಗೆ ನಮ್ಮ ಕೃತಜ್ಞತೆಗಳು.

No comments:

Post a Comment