Translate

OUR VISITER ON DATE

Monday, December 13, 2010

ಕಾಂ. ಸಿದ್ದಪ್ಪ ಇನ್ನಿಲ್ಲ

ಶಿವಮೊಗ್ಗ ವಿಭಾಗದ ಪೋಸ್ಟ್ ಮ್ಯಾನ್ ಮತ್ತು ಗ್ರೂಪ್ ಡಿ ಸಂಘದ ವಿಭಾಗೀಯ ಅದ್ಯಕ್ಷರಾದ ಕಾಂ. ಜಿ.ಬಿ ಸಿದ್ದಪ್ಪನವರು ದಿನಾಂಕ ೦೭.೧೨.೨೦೧೦ ರಂದು ದೈವಾದೀನರಾದರು. ಕೆಲಸಕ್ಕೆ ಸೇರಿದ ದಿನದಿಂದಲೂ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ಎಲ್ಲ ಹೋರಾಟಗಳಲ್ಲೂ ಮುಂದಿರುತ್ತಿದ್ದ ಹಾಗೂ ಅನ್ಯಾಯದ ವಿರುದ್ದ ಯಾವತ್ತೂ ಸಿಡಿದೇಳುತ್ತಿದ್ದ ಇಂತಹಾ ಧೀಮಂತ ನಾಯಕನ ನಿದನದಿಂದ ಶಿವಮೊಗ್ಗ ವಿಭಾಗೀಯ ಸಂಘವು ಅನಾಥವಾಗಿದೆ ಮತ್ತು ವಿಭಾಗೀಯ ಸಂಘಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಸುಮಾರು ೫೬ ಬಾರಿ ಸ್ಯಯಂ ಪ್ರೇರಿತ ರಕ್ತದಾನವನ್ನು ಮಾಡಿದ್ದ ಇವರು ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಅಸ್ವಸ್ತರಾಗಿದ್ದ ಸಿದ್ದಪ್ಪನವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮತ್ತು ಅಪಾರ ಬಂಧು ವರ್ಗ ಮತ್ತು ಅಭಿಮಾನಿ ಗಳನ್ನೂ ಬಿಟ್ಟು ಅಗಲಿದ್ದಾರೆ. ದಯಾಮಯನಾದ ಭಗವಂತನು ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು " ಶಿವಮೊಗ್ಗ ಪೋಸ್ಟ್" ಭಗವಂತನಲ್ಲಿ ಸಮಸ್ತ ಅಂಚೆ ನೌಕರರ ಪರವಾಗಿ ಬೇಡುತ್ತದೆ. ಕಾಂ. ಸಿದ್ದಪ್ಪನವರಿಗೆ ಕೆಂಪು ನಮನಗಳನ್ನು ಸಲ್ಲಿಸುತ್ತದೆ.
ಕಾಂ. ಸಿದ್ದಪ್ಪ -ಅಮರರಾಗಲಿ

No comments:

Post a Comment